ಕಾರದ ಬಯಕೆ

ಕಾರದ ಹೂಹನಿ ನೀ
ಖಾರವಾಗದೇ ಬಾ
ಉಬ್ಬರಿಸದೆ ಅಬ್ಬರಿಸದೆ
ತೇಲುವ ಮಳೆಬಿಲ್ಲಿಗೆ ಮಧುರ ಸ್ಪರ್ಶ
ಮೋಹನನಾಗಿ ಬಾ
ಲಘು ತೆಪ್ಪಕ್ಕೆ ನೀರ ಸೆಲೆಯಾಗಿ ಬಾ
ಶರಧಿಯಾಳದಿ ಚಿಪ್ಪ ಗರ್ಭವ ಸೇರಿ
ಮುತ್ತಾಗು ಬಾ

ಒತ್ತಾದ ಗಿಡಗಂಟಿಗೆ
ಮಸ್ತಕಾಭಿಷೇಕದ ಮಂತ್ರಜಲವಾಗಿ ಬಾ
ಮೊದಲ ಮಳೆಹನಿಯ ಮುದ್ದು
ಆಲಿಂಗನ ಬೇಡುವ ಎಳೆ ಬಾಲೆಯರ
ಮುಂಗುರಳ ನೇವರಿಸು ಬಾ

ಪದ್ಮಪತ್ರದ ಮೇಲೆ ಕುಣಿವ
ಅಂಟಿಕೊಳ್ಳದ ಒಂಟಿ ಹನಿಯಾಗಿ ಬಾ
ಮುಗಿಲಕನ್ಯೆಯ ಮಸ್ತಕಕೆ ಮುದ್ದಾಡಿ
ಮನವೊಲಿಸಿ ಭೂರಾಣಿ ರಂಗೇರಿಸು ಬಾ
ಅಂತಕ್ಕೂ ಅನಂತಕ್ಕೂ ಎಣೆಯಾಗಿ
ಅಣು‌ಅಣುವ ಮಣಿಗೊಳಿಸು ಬಾ

ಮುಗಿಲಿಂದ ಬಿದ್ದರೂ
ಮಣ್ಣ ಆಸೆಯ ಹೊತ್ತು
ಮುಗಿಲಿಗೇರಿದರೂ ಚುಕ್ಕಿ
ಚಂದ್ರಮನ ಮೋಹಕ್ಕೆ ಸೋತು
ಮರೆಯದೇ ಬಾ ಮಧುವಾಗಿ ಬಾ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಛೋಟೀವಾಲ
Next post ಯದುಮಣಿಯ ಜನುಮದಿನ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

cheap jordans|wholesale air max|wholesale jordans|wholesale jewelry|wholesale jerseys